1.5 C
Munich
Wednesday, March 8, 2023

Daali Dhananjay praises 19 20 21 Kannada movie and shares his review | 19.20.21: ‘ನಾನು ಈ ವರ್ಷ ನೋಡಿದ ಬೆಸ್ಟ್​ ಸಿನಿಮಾ 19.20.21’: ಮನಸಾರೆ ಹೊಗಳಿದ ಡಾಲಿ ಧನಂಜಯ್​

ಓದಲೇಬೇಕು

Daali Dhananjay | 19.20.21 Kannada Movie: ‘ಈ ಸಿನಿಮಾ ಕಾಡುತ್ತದೆ. ಪ್ರತಿ ದೃಶ್ಯ, ಪಾತ್ರ, ಸಂಭಾಷಣೆ ಎಲ್ಲವೂ ಚೆನ್ನಾಗಿದೆ. ಅದರಲ್ಲೂ ಕ್ಲೈಮ್ಯಾಕ್ಸ್​ ಅದ್ಭುತ ಎನಿಸಿತು’ ಎಂದು ಡಾಲಿ ಧನಂಜಯ್​ ಹೇಳಿದ್ದಾರೆ.

19.20.21 ಸಿನಿಮಾ ಪೋಸ್ಟರ್​. ಡಾಲಿ ಧನಂಜಯ್

ಮಂಸೋರೆ ನಿರ್ದೇಶನದ ‘19.20.21’ ಸಿನಿಮಾ (19.20.21 Movie) ಜನಮನ ಗೆಲ್ಲುತ್ತಿದೆ. ನೈಜ ಘಟನೆ ಆಧರಿಸಿ ತಯಾರಾದ ಈ ಚಿತ್ರಕ್ಕೆ ಅತ್ಯುತ್ತಮ ವಿಮರ್ಶೆ ಸಿಕ್ಕಿದೆ. ಸೋಶಿಯಲ್​ ಮೀಡಿಯಾದಲ್ಲಿ ಸಿನಿಪ್ರೇಮಿಗಳು ಈ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ಸಿನಿಮಾ ವೀಕ್ಷಿಸಿದ್ದಾರೆ. ಡಾಲಿ ಧನಂಜಯ್ (Daali Dhananjay)​ ಅವರಿಗೆ ‘19.20.21’ ಚಿತ್ರ ತುಂಬ ಇಷ್ಟ ಆಗಿದೆ. ಇತ್ತೀಚೆಗೆ ಸಿನಿಮಾ ನೋಡಿರುವ ಅವರು ಮನಸಾರೆ ಹೊಗಳಿದ್ದಾರೆ. ‘ಇದು ಎಲ್ಲರೂ ನೋಡಬೇಕಾದ’ ಸಿನಿಮಾ ಎಂದಿದ್ದಾರೆ ಧನಂಜಯ್​. ಮಲೆಕುಡಿಯ ಸಮುದಾಯದವರು ಎದುರಿಸಿದ ದೌರ್ಜನ್ಯದ ಕಥೆಯನ್ನು ‘19.20.21’ ಸಿನಿಮಾ ಒಳಗೊಂಡಿದೆ. ಮಂಸೋರೆ (Mansore) ಅವರ ನಿರ್ದೇಶನಕ್ಕೆ ಎಲ್ಲ ಕಡೆಗಳಿಂದ ಪ್ರಶಂಸೆ ಸಿಗುತ್ತಿದೆ.

‘19.20.21’ ಬಗ್ಗೆ ಡಾಲಿ ಧನಂಜಯ್​ ಹೇಳಿದ್ದೇನು?

‘ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಇದು ಎಲ್ಲರೂ ನೋಡಬೇಕಾದ ಸಿನಿಮಾ. ರಿಯಲ್​ ಘಟನೆಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಆ ಚಿತ್ರದ ಪಾತ್ರಗಳು ಇನ್ನೂ ನಮ್ಮ ನಡುವೆ ಇದ್ದಾರೆ. ತುಂಬ ಅದ್ಭುತವಾದ ಅನುಭವ, ಅತ್ಯುತ್ತಮವಾದ ಬರವಣಿಗೆ. ಈ ರೀತಿಯ ಸಿನಿಮಾ ಮಾಡೋದು ತುಂಬ ಕಷ್ಟ. ನಾನು ಈ ವರ್ಷದಲ್ಲಿ ನೋಡಿರುವ ಬೆಸ್ಟ್​ ಸಿನಿಮಾ ಅಂತ ಹೇಳೋಕೆ ಇಷ್ಟಪಡುತ್ತೇನೆ’ ಎಂದಿದ್ದಾರೆ ಡಾಲಿ ಧನಂಜಯ್​.

ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ

ಇದನ್ನೂ ಓದಿ



‘ಎಷ್ಟೋ ಸಿನಿಮಾಗಳಿಗೆ ಬರ್ತೀವಿ, ನೋಡ್ತೀವಿ, ಮಾತಾಡ್ತೀವಿ. ಅದು ಏನೂ ವ್ಯತ್ಯಾಸ ಅನಿಸಲ್ಲ. ಒಂದು ನೈತಿಕ ಬೆಂಬಲ ನೀಡೋಕೆ ಬರ್ತೀವಿ. ಆದರೆ ‘19.20.21’ ರೀತಿಯ ಸಿನಿಮಾಗಳನ್ನು ನೋಡಿದಾಗ ಇದು ತುಂಬ ಜನರನ್ನು ತಲುಪಬೇಕು ಅನಿಸುತ್ತೆ. ಇದರಲ್ಲಿ ಒಂದು ಎಜುಕೇಷನ್​ ಇದೆ. ಎಲ್ಲದರ ಬಗ್ಗೆ ನಾವು ಸಹಾನುಭೂತಿ ಕಳೆದುಕೊಳ್ಳುತ್ತಾ ಇದೀವಿ. ಸುತ್ತಮುತ್ತ ನಡೆದಿದ್ದು, ನಮನ್ನು ಬಂದು ತಟ್ಟುವ ತನಕ ನಮಗೆ ಏನೂ ಅನಿಸಲ್ಲ. ‘19.20.21’ ಇಡೀ ಸಿನಿಮಾ ಕಾಡುತ್ತದೆ. ಪ್ರತಿ ದೃಶ್ಯ, ಪಾತ್ರ, ಸಂಭಾಷಣೆ ಎಲ್ಲವೂ.. ಅದರಲ್ಲೂ ಕ್ಲೈಮ್ಯಾಕ್ಸ್​ ಅದ್ಭುತ ಎನಿಸಿತು’ ಎಂದು ಡಾಲಿ ಧನಂಜಯ್​ ಹೇಳಿದ್ದಾರೆ.

ಶೃಂಗ ಬಿ.ವಿ. ಅವರು ‘19.20.21’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಬಾಲಾಜಿ ಮನೋಹರ್​, ರಾಜೇಶ್​ ನಟರಂಗ, ಕೃಷ್ಣ ಹೆಬ್ಬಾಳೆ, ವಿಶ್ವ ಕರ್ಣ, ಮಹದೇವ ಹಡಪದ, ಎಂ.ಡಿ. ಪಲ್ಲವಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವು ಬಿ.ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ. ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗಡೆ ಅವರ ಸಹ ನಿರ್ಮಾಣವಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!