15.6 C
Munich
Wednesday, March 22, 2023

For sake of secularism Atal ji became PM Uddhav Thackeray attacks BJP | ಜಾತ್ಯತೀತತೆಗಾಗಿ ಅಟಲ್ ಜಿಯನ್ನು ಪ್ರಧಾನಿ ಮಾಡಿದ್ದು: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ

ಓದಲೇಬೇಕು

ಮಹಾರಾಷ್ಟ್ರ ರೂಪುಗೊಂಡದ್ದು ಮೋದಿಯವರಿಂದಲ್ಲ. ಬದಲಾಗಿ ಛತ್ರಪತಿ ಶಿವಾಜಿ ಮಹಾರಾಜರಿಂದ. ಪ್ರಜಾಪ್ರಭುತ್ವದ ಮೂರು ಸ್ತಂಭಗಳು ಕುಸಿದಿವೆ. ಮಾಧ್ಯಮದ ಕೈಯಲ್ಲಿ ಲೇಖನಿಯ ಬದಲು ಕಮಲವಿದೆ. ಉಳಿದಿರುವ ಭರವಸೆ ನ್ಯಾಯಾಂಗ ಮತ್ತು ಸುಪ್ರೀಂಕೋರ್ಟ್ ಮಾತ್ರ ಎಂದ ಸುಪ್ರೀಂಕೋರ್ಟ್

ಉದ್ಧವ್ ಠಾಕ್ರೆ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಅವರು ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದೊಂದಿಗೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಹಿಂದುತ್ವವನ್ನು ತ್ಯಜಿಸಿದ್ದಾರೆ ಎಂದು ಬಿಜೆಪಿ (BJP) ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಠಾಕ್ರೆ ಬಿಜೆಪಿಯ ರಥಯಾತ್ರೆಯನ್ನು ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ವಿರೋಧಿಸಿದಾಗ ಶಿವಸೇನಾ ಬೆಂಬಲಿಸಿತ್ತು. ಲಾಲ್ ಕೃಷ್ಣ ಅಡ್ವಾಣಿ ಅವರು ಬಿಜೆಪಿಯ ಮುಖವಾಗಿದ್ದರು. ಆದರೆ ಸಮ್ಮಿಶ್ರ ಪಕ್ಷಗಳು ಅಡ್ವಾಣಿ ಅವರ ಹೆಸರನ್ನು ವಿರೋಧಿಸಿದ್ದರಿಂದ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರು ಭಾರತದ ಪ್ರಧಾನಿಯಾದರು ಎಂದು ಠಾಕ್ರೆ ಹೇಳಿದ್ದಾರೆ.

ಬಿಜೆಪಿ ರಥಯಾತ್ರೆ ಆರಂಭಿಸಿದಾಗ ನಾವು ಅವರನ್ನು ಬೆಂಬಲಿಸಿದ್ದೆವು. ಅವರು ಕೇವಲ ಇಬ್ಬರು ಸಂಸದರನ್ನು ಹೊಂದಿದ್ದರು. ಅಡ್ವಾಣಿ ಅವರ ಮುಖವಾಗಿತ್ತು. ಆದರೆ ಸರ್ಕಾರ ರಚಿಸಬೇಕಾದಾಗ ಮತ್ತು ಬಿಜೆಪಿ ಜಯಲಲಿತಾ ಮತ್ತು ಇತರರಿಂದ ಬೆಂಬಲವನ್ನು ಬಯಸಿದಾಗ, ಅವರು ಜಾತ್ಯತೀತತೆಗಾಗಿ ಅಡ್ವಾಣಿಯ ಮುಖವನ್ನು ವಿರೋಧಿಸಿದರು. ಅಟಲ್ ಜಿ ಪ್ರಧಾನಿಯಾದರು. ಹಾಗಾದರೆ ಹಿಂದೂ ಧರ್ಮವನ್ನು ತೊರೆದವರು ಯಾರು – ಶಿವಸೇನಾ ಅಥವಾ ಬಿಜೆಪಿಯೇ? ಎಂದು ಠಾಕ್ರೆ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಮಾಧ್ಯಮದ ಪಾತ್ರವನ್ನು ಟೀಕಿಸಿದ ಠಾಕ್ರೆ, ಅದರ ಕೈಯಲ್ಲಿ ಪೆನ್ನಿನ ಬದಲು ಕಮಲ (ಬಿಜೆಪಿ ಚಿಹ್ನೆ) ಇದೆ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳಲ್ಲಿ ಮೂರು ಕುಸಿದಿರುವುದರಿಂದ ನ್ಯಾಯಾಂಗವು ಉಳಿದಿರುವ ಏಕೈಕ ಭರವಸೆಯಾಗಿದೆ ಎಂದು ಹೇಳಿದರು.

ಮಹಾರಾಷ್ಟ್ರ ರೂಪುಗೊಂಡದ್ದು ಮೋದಿಯವರಿಂದಲ್ಲ. ಅದು ರೂಪುಗೊಂಡಿದ್ದು ಛತ್ರಪತಿ ಶಿವಾಜಿ ಮಹಾರಾಜರಿಂದ. ಪ್ರಜಾಪ್ರಭುತ್ವದ ಮೂರು ಸ್ತಂಭಗಳು ಕುಸಿದಿವೆ. ಮಾಧ್ಯಮದ ಕೈಯಲ್ಲಿ ಲೇಖನಿಯ ಬದಲು ಕಮಲವಿದೆ. ಉಳಿದಿರುವ ಭರವಸೆ ನ್ಯಾಯಾಂಗ ಮತ್ತು ಸುಪ್ರೀಂಕೋರ್ಟ್ ಮಾತ್ರ. ನ್ಯಾಯಾಂಗವು ನ್ಯಾಯದ ಅವನತಿಗೆ ಅವಕಾಶ ನೀಡುವುದಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಜೂನ್ 2022 ರ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ನಿಷ್ಠಾವಂತ ಶಾಸಕರಿಂದ ಆಗಿನ ಅವಿಭಜಿತ ಶಿವಸೇನಾಯಲ್ಲಿನ ದಂಗೆಯಿಂದ ಉಂಟಾದ ಘಟನೆಗಳ ಕುರಿತು ವಿಚಾರಣೆಯನ್ನು ನಡೆಸುವ ಸಮಯದಲ್ಲಿ ಠಾಕ್ರೆ ಅವರ ಹೇಳಿಕೆಗಳು ಬಂದಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!