1.7 C
Munich
Wednesday, March 8, 2023

India Afghan Relations: India To Send 20,000 Metric Tonnes Of Wheat To Afghanistan Via Iran Port | India Afghanistan Relationship: ಪಾಕಿಸ್ತಾನದ ಮಾರ್ಗ ಬಳಸದೆ ಅಫ್ಘಾನಿಸ್ತಾನಕ್ಕೆ 20 ಸಾವಿರ ಮೆಟ್ರಿಕ್ ಟನ್ ಗೋಧಿ ರಫ್ತು ಮಾಡಲಿದೆ ಭಾರತ

ಓದಲೇಬೇಕು

ಭಾರತವು ಯುಎನ್‌ವಿಎಫ್‌ಪಿ ಸಹಭಾಗಿತ್ವದಲ್ಲಿ ಅಫ್ಘಾನಿಸ್ತಾನಕ್ಕೆ 20 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ರಫ್ತು ಮಾಡಲಿದೆ. ವಿಶೇಷವೆಂದರೆ ಗೋಧಿ ರಫ್ತನ್ನು ಪಾಕಿಸ್ತಾನದ ಮೂಲಕ ಮಾಡದೆ, ಇರಾನ್‌ನ ಚಬಹಾರ್ ಬಂದರಿನ ಮೂಲಕ ಕಳುಹಿಸಲಾಗುತ್ತಿದೆ.

ಇರಾನ್ ಬಂದರು

Image Credit source: NDTV

ಭಾರತವು ಯುಎನ್‌ವಿಎಫ್‌ಪಿ ಸಹಭಾಗಿತ್ವದಲ್ಲಿ ಅಫ್ಘಾನಿಸ್ತಾನಕ್ಕೆ 20 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ರಫ್ತು ಮಾಡಲಿದೆ. ವಿಶೇಷವೆಂದರೆ ಗೋಧಿ ರಫ್ತನ್ನು ಪಾಕಿಸ್ತಾನದ ಮೂಲಕ ಮಾಡದೆ, ಇರಾನ್‌ನ ಚಬಹಾರ್ ಬಂದರಿನ ಮೂಲಕ ಕಳುಹಿಸಲಾಗುತ್ತಿದೆ. ವಾಸ್ತವವಾಗಿ, ಭಾರತ ಮತ್ತು ಐದು ಮಧ್ಯ ಏಷ್ಯಾ ರಾಷ್ಟ್ರಗಳು ಮಂಗಳವಾರ (ಮಾರ್ಚ್ 07) ಭಯೋತ್ಪಾದನೆ ಮತ್ತು ಉಗ್ರವಾದದ ಪ್ರಾದೇಶಿಕ ಬೆದರಿಕೆಗಳನ್ನು ಜಂಟಿಯಾಗಿ ಎದುರಿಸುವ ಮರ್ಗಸೂಚಿಗಳ ಕುರಿತು ಚರ್ಚೆ ನಡೆಸಿವೆ. ಈ ಸಂದರ್ಭದಲ್ಲಿ, ಅಫ್ಘಾನಿಸ್ತಾನದ ಭೂಮಿಯನ್ನು ಭಯೋತ್ಪಾದಕ ತರಬೇತಿಗಾಗಿ ಅಥವಾ ಅಂತಹ ಯಾವುದೇ ಚಟುವಟಿಕೆಯನ್ನು ಯೋಜಿಸಲು ಬಳಸಬಾರದು ಎಂದು ಒತ್ತಿಹೇಳಲಾಯಿತು.

ಅಫ್ಘಾನಿಸ್ತಾನದಲ್ಲಿ ವಿಷಮ ಪರಿಸ್ಥಿತಿ ಇದೆ, ಎರಡು ದಶಕಗಳ ಬಳಿಕ ಅಫ್ಘಾನ್ ಮತ್ತೆ ತಾಲಿಬಾನ್ ಉಗ್ರರ ವಶವಾಗಿದೆ.
ತಾಲಿಬಾನ್ ಗುಂಪು ಕಾಬೂಲ್​ಗೆ ನುಗ್ಗಿದೆ, ಭಾರತವು ತನ್ನ ರಾಜತಾಂತ್ರಿಕರನ್ನು ಹಿಂಪಡೆದಿದೆ. ಭಾರತ-ಅಫ್ಘಾನಿಸ್ತಾನದ ಸ್ನೇಹ ವೃದ್ಧಿಯಾಗಿದ್ದರಿಂದ ಭಾರತಕ್ಕೆ ಅನೇಕ ಅನುಕೂಲಗಳಿವೆ.

ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತನ್ನ ಸರಕು ಸಾಗಣೆಗಾಗಿ ಪಾಕಿಸ್ತಾನದ ಮೂಲಕವೇ ಇದ್ದ ಭೂಮಾರ್ಗದ ಅವಲಂಬನೆಯನ್ನು ತಪ್ಪಿಸಿದ ಮೋದಿ ಸರ್ಕಾರ ಇರಾನ್​ನ ಚಬಾಹರ್ ಬಂದರನ್ನು ಅಭಿವೃದ್ಧಿಪಡಿಸಿ, ಭಾರತದಿಂದ ಇರಾನ್, ಇರಾನ್​ನಿಂದ ಅಫ್ಘಾನಿಸ್ತಾನ, ಅಫ್ಘಾನಿಸ್ತಾನದ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಾಮಗ್ರಿ ರಫ್ತು ಮಾಡುವ ಹೊಸ ಜಲ ಮತ್ತು ಭೂ ಮಾರ್ಗಗಳನ್ನು ಸೃಷ್ಟಿಸಿಕೊಂಡಿತ್ತು.

ಮತ್ತಷ್ಟು ಓದಿ: Girls Education: 1 ರಿಂದ 6 ನೇ ತರಗತಿಯವರೆಗೆ ಶಿಕ್ಷಣ ಪಡೆಯಲು ಅಫ್ಘಾನ್ ಹೆಣ್ಣುಮಕ್ಕಳಿಗೆ ಅವಕಾಶ ನೀಡಿದ ತಾಲಿಬಾನ್

ಅಫ್ಘಾನಿಸ್ತಾನದ ಅಭಿವೃದ್ಧಿಗೆ ಹೇರಳವಾಗಿ ಧನಸಹಾಯ ಮಾಡುವ ಮೂಲಕ ಮುಸ್ಲಿಂ ರಾಷ್ಟ್ರಗಳ ಪ್ರೀತಿಗೂ ಪಾತ್ರವಾಗಿದ್ದ ಭಾರತ, ಕತಾರ್, ಇರಾನ್, ಸೌದಿ ಅರೇಬಿಯಾ ರಾಷ್ಟ್ರಗಳ ಜತೆಗಿನ ಸ್ನೇಹವನ್ನು ಗಟ್ಟಿಗೊಳಿಸಿಕೊಂಡಿತ್ತು.

ಏತನ್ಮಧ್ಯೆ, ಅಫ್ಘಾನಿಸ್ತಾನಕ್ಕೆ ಸಹಾಯ ಮಾಡುವ ಗೋಧಿ ರವಾನೆಯನ್ನು ಪಾಕಿಸ್ತಾನದ ಮೂಲಕ ಕಳುಹಿಸದೆ ಇರಾನ್ ಮೂಲಕ ಕಳುಹಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ, ಇರಾನ್‌ನ ಚಬಹಾರ್ ಬಂದರಿನ ಮೂಲಕ ಅಫ್ಘಾನಿಸ್ತಾನಕ್ಕೆ 20,000 ಟನ್ ಗೋಧಿಯನ್ನು ನೆರವು ನೀಡಲು ಯುಎನ್ ವರ್ಲ್ಡ್ ಫುಡ್ ಪ್ರೋಗ್ರಾಂ (ಡಬ್ಲ್ಯುಎಫ್‌ಪಿ) ಸಹಭಾಗಿತ್ವದಲ್ಲಿ ಕೆಲಸ ಮಾಡುವುದಾಗಿ ಭಾರತ ಘೋಷಿಸಿದೆ.

ಈ ಹಿಂದೆ, ಭಾರತವು ಪಾಕಿಸ್ತಾನದ ಮೂಲಕ ರಸ್ತೆಯ ಮೂಲಕ ಸುಮಾರು 40,000 ಟನ್ ಗೋಧಿಯನ್ನು ಪೂರೈಸಿದೆ, ಆದರೆ ಅಂದು ಹಲವು ಅಡೆತಡೆಗಳನ್ನು ಎದುರಿಸಬೇಕಾಗಿತ್ತು. ಸಭೆಯಲ್ಲಿ ಭಾರತ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ವಿಶೇಷ ಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಡಬ್ಲ್ಯುಎಫ್‌ಪಿ ಮತ್ತು ಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಮ್ಸ್ (ಯುಎನ್‌ಒಡಿಸಿ) ದೇಶಗಳ ಪ್ರತಿನಿಧಿಗಳೂ ಇದರಲ್ಲಿ ಭಾಗವಹಿಸಿದ್ದರು.

ಆಗಸ್ಟ್ 2021 ರಲ್ಲಿ ಕಾಬೂಲ್​ ಅನ್ನು ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ತಿಂಗಳುಗಳ ನಂತರ, ತೀವ್ರ ಆಹಾರ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಆಫ್ಘನ್ ಜನರಿಗೆ ಭಾರತವು 50,000 ಮೆಟ್ರಿಕ್ ಟನ್ ಗೋಧಿಯ ಸಹಾಯವನ್ನು ಘೋಷಿಸಿತು.
ತರುವಾಯ, ಪಾಕಿಸ್ತಾನದ ಮೂಲಕ ಭೂ ಮಾರ್ಗವನ್ನು ಬಳಸಿಕೊಂಡು ಅಫ್ಘಾನಿಸ್ತಾನಕ್ಕೆ ಸರಕುಗಳನ್ನು ಕಳುಹಿಸಲಾಯಿತು.

ಸುಮಾರು ತಿಂಗಳುಗಳ ಚರ್ಚೆಯ ನಂತರ ಇಸ್ಲಾಮಾಬಾದ್ ಸಾರಿಗೆ ಸೌಲಭ್ಯವನ್ನು ನೀಡಿತು. ಆಗಸ್ಟ್ 2021 ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಅವರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಭಾರತವು ತನ್ನ ಅಧಿಕಾರಿಗಳನ್ನು ರಾಯಭಾರ ಕಚೇರಿಯಿಂದ ಹಿಂತೆಗೆದುಕೊಂಡಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!