15.3 C
Munich
Tuesday, March 21, 2023

Karnatakaarnataka assembly election 2023 aam aadmi party first list of candidates to release on march 20 | Karnataka Assembly Poll 2023 ಎಎಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧ, ನಾಳೆ ಮೊದಲ ಪಟ್ಟಿ ಬಿಡುಗಡೆ: ಯಾರು, ಯಾವ ಕ್ಷೇತ್ರಕ್ಕೆ?

ಓದಲೇಬೇಕು

ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಭರ್ಜರಿ ಸಿದ್ಧತೆ ನಡೆಸಿದ್ದು, ನಾಳೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲಿದೆ. 80 ಕ್ಷೇತ್ರಗಳ ಮೊದಲ ಲಿಸ್ಟ್​ನಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಸಂಭಾವ್ಯ ಅಭ್ಯರ್ಥಿ ಪಟ್ಟಿ ಈ ಕೆಳಗಿನಂತಿದೆ.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Elections 2023) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಈಗಗಲೇ ಜೆಡಿಎಸ್​ ಮೊದಲ ಪಟ್ಟಿ ಪ್ರಕಟಿಸಿದ್ದು, ಕಾಂಗ್ರೆಸ್​ನ ಫಸ್ಟ್​ ಲಿಸ್ಟ್​ ಸಹ ರೆಡಿಯಾಗಿದೆ. ಇನ್ನು ಆಮ್ ಆದ್ಮಿ ಪಕ್ಷ (Aam Aadmi Party) ಸಹ ಕರ್ನಾಟಕದಲ್ಲಿ ಈ ಬಾರಿ ಕಮಾಲ್​ ಮಾಡಲು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 224  ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಅದರಂತೆ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧವಾಗಿದ್ದು, ನಾಳೆ(ಮಾರ್ಚ್ 20ರಂದು ಪ್ರಕಟವಾಗಲಿದೆ. ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ನಾಳೆ 80 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ: Congress: ಯುಗಾದಿ ನಂತರ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 125 ಅಭ್ಯರ್ಥಿಗಳ ಹೆಸರು ಅಂತಿಮ

ಎಎಪಿ ಮೊದಲ ಪಟ್ಟಿಯ ಸಂಭಾವ್ಯ ಅಭ್ಯರ್ಥಿ ಗಳು

ಚಿಕ್ಕಪೇಟೆ-ಬ್ರಿಜೇಶ್ ಕಾಳಪ್ಪ, ತುರುವೇಕೆರೆ-ಟೆನ್ನಿಸ್ ಕೃಷ್ಣ, ರೋಣ- ಆನೇಕಲ್ ದೊಡ್ಡಯ್ಯ, ಹಾಸನ-ಆಗಿಲೆ ಯೋಗೇಶ್, ಸಿ.ವಿ. ರಾಮನ್ ನಗರ-ಮೋಹನ್ ದಾಸರಿ, ಮಹಾಲಕ್ಷ್ಮೀ ಲೇಔಟ್-ಶಾಂತಲಾ ದಾಮ್ಲೆ, ಮಲ್ಲೇಶ್ವರಂ-ಸುಮನ್ ಪ್ರಶಾಂತ್, ಪುಲಕೇಶಿ ನಗರ-ಸುರೇಶ್ ರಾಥೋಡ್, ಸಾಗರ-ದಿವಾಕರ್, ತೀರ್ಥಹಳ್ಳಿ-ಸಾಲೂರು ಶಿವಕುಮಾರ್ ಗೌಡ, ಬೀದರ್ ದಕ್ಷಿಣ-ನಸೀಬ್ ಮುದ್ದೀನ್ ಪಟೇಲ್ , ರಾಜಾಜಿನಗರ-ಬಿ.ಟಿ. ನಾಗಣ್ಣ, ಮಂಗಳೂರು ದಕ್ಷಿಣ-ಸಂತೋಷ್ ಕಾಮತ್, ದೇವನಹಳ್ಳಿ-ಬಿ.ಕೆ. ಶಿವಪ್ಪ, ವಿಜಯನಗರ-ಡಾ.ರಮೇಶ್ ಬೆಳ್ಳಂಕೊಂಡ, ದೊಡ್ಡಬಳ್ಳಾಪುರ-ಪುರುಷೋತ್ತಮ, ದಾಸರಹಳ್ಳಿ-ಕೀರ್ತನ್ ಕುಮಾರ್ ಮಂಜಪ್ಪ, ಪದ್ಮನಾಭನಗರ-ಅಜಯ್ ಗೌಡ, ಮಾಲೂರು-ಎಂ. ರವಿಶಂಕರ್.

ರಾಜ್ಯ ವಿಧಾನಸಭಾ ಚುನಾವಣೆ 2023ಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದ್ದು, ಈ ನಡುವಲ್ಲೇ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ನಡೆಸಿವೆ. ಇತ್ತೀಚೆಗೆ ಅಷ್ಟೇ ಹೊಸದಾಗಿ ಪುನರ್‌ರಚಿಸಲಾಗಿದ್ದ ರಾಜ್ಯ ಎಎಪಿಯಲ್ಲಿ ರಾಜ್ಯಾಧ್ಯಕ್ಷರಾಗಿ ಪೃಥ್ವಿ ರೆಡ್ಡಿ ಮುಂದವರೆದಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಸಂಚಿತ್ ಸಾಹ್ನಿ ಇದ್ದಾರೆ. ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿ ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರನ್ನು ನೇಮಕ ಮಾಡಲಾಗಿತ್ತು. ಆದ್ರೆ, ಅವರು ದಿಢೀರ್ ಎಎಪಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸಂವಹನ ಉಸ್ತುವಾರಿಯಾಗಿ ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಸ್ಯಾಂಡಲ್ ವುಡ್ ನಟ-ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅವರನ್ನು ನೇಮಕ ಮಾಡಲಾಗಿತ್ತು.

ಮತ್ತಷ್ಟು ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!