10.5 C
Munich
Thursday, March 30, 2023

Lotus will bloom in Meghalaya Assembly election people wants a government that puts people first says PM Modi | ಕುಟುಂಬಕ್ಕಲ್ಲ, ಜನರಿಗೆ ಆದ್ಯತೆ ನೀಡುವ ಸರ್ಕಾರವನ್ನು ಮೇಘಾಲಯದ ಜನರು ಬಯಸುತ್ತಾರೆ: ಮೋದಿ

ಓದಲೇಬೇಕು

Meghalaya Assembly election ದೆಹಲಿಯಲ್ಲಿ ಮಾತ್ರವಲ್ಲದೆ ಮೇಘಾಲಯದಲ್ಲೂ ಕುಟುಂಬ ನಡೆಸುವ ಪಕ್ಷಗಳು ತಮ್ಮ ಬೊಕ್ಕಸವನ್ನು ತುಂಬಲು ರಾಜ್ಯವನ್ನು ಎಟಿಎಂ ಆಗಿ ಪರಿವರ್ತಿಸಿದ್ದವು. ಜನರು ಅವರನ್ನು ತಿರಸ್ಕರಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ನರೇಂದ್ರ ಮೋದಿ

ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ (Meghalaya Assembly election) ಕಮಲ ಅರಳಲಿದೆ ಹೇಳಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಬಿಜೆಪಿ(BJP) ಯಾವಾಗಲೂ ಜನರ ಕಲ್ಯಾಣಕ್ಕೆ ಆದ್ಯತೆ ನೀಡಿದೆ ಎಂದಿದ್ದಾರೆ ರೋಡ್ ಶೋನಲ್ಲಿ ಭಾಗವಹಿಸಿದ ನಂತರ ಶಿಲ್ಲಾಂಗ್‌ನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರವರು.ರಸ್ತೆ, ರೈಲು ಮತ್ತು ವಾಯು ಸಂಪರ್ಕದ ಕೊರತೆಯು ಹಿಂದೆ ಮೇಘಾಲಯದಲ್ಲಿ ಅಭಿವೃದ್ಧಿಗೆ ಅಡ್ಡಿಯಾಗಿತ್ತು. ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯ ಮತ್ತು ಈಶಾನ್ಯ ಪ್ರದೇಶದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ. ಯುವಕರು, ಮಹಿಳೆಯರು, ವ್ಯಾಪಾರಿಗಳು ಅಥವಾ ಸರ್ಕಾರಿ ನೌಕರರೇ ಇರಲಿ, ಮೇಘಾಲಯದಲ್ಲಿ ಬಿಜೆಪಿ ಅಧಿಕಾರದಲ್ಲಿರಬೇಕೆಂದು ಎಲ್ಲರೂ ಬಯಸುತ್ತಾರೆ ಎಂದಿದ್ದಾರೆ ಮೋದಿ.

ಮೇಘಾಲಯದ ಶ್ರೀಮಂತ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು “ನಾನು ಮೇಘಾಲಯದ ಬಗ್ಗೆ ಯೋಚಿಸುವಾಗ, ನಾನು ಪ್ರತಿಭಾವಂತ ವ್ಯಕ್ತಿಗಳು, ರೋಮಾಂಚಕ ಸಂಪ್ರದಾಯಗಳ ಬಗ್ಗೆ ಯೋಚಿಸುತ್ತೇನೆ. ನಾನು ಭರವಸೆ ಮತ್ತು ಅಭಿವೃದ್ಧಿಯ ಸಂದೇಶದೊಂದಿಗೆ ಇಲ್ಲಿದ್ದೇನೆ.

ಭಾರತವು ಯಶಸ್ಸಿನ ಹೊಸ ಎತ್ತರಗಳನ್ನು ಏರುತ್ತಿದೆ, ಮೇಘಾಲಯ ಅದಕ್ಕೆ ಬಲವಾದ ಕೊಡುಗೆಗಳನ್ನು ನೀಡುತ್ತಿದೆ.ಮೇಘಾಲಯವು ಈಗ ಸ್ವಂತ ಕುಟುಂಬದ ಬದಲು ಜನರಿಗೆ ಆದ್ಯತೆ ನೀಡುವ ಸರ್ಕಾರವನ್ನು ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
“ದೆಹಲಿಯಲ್ಲಿ ಮಾತ್ರವಲ್ಲದೆ ಮೇಘಾಲಯದಲ್ಲೂ ಕುಟುಂಬ ನಡೆಸುವ ಪಕ್ಷಗಳು ತಮ್ಮ ಬೊಕ್ಕಸವನ್ನು ತುಂಬಲು ರಾಜ್ಯವನ್ನು ಎಟಿಎಂ ಆಗಿ ಪರಿವರ್ತಿಸಿದ್ದವು. ಜನರು ಅವರನ್ನು ತಿರಸ್ಕರಿಸಿದ್ದಾರೆ. ಮೇಘಾಲಯ ಈಗ ಜನರಿಗೆ ಆದ್ಯತೆ ನೀಡುವಸರ್ಕಾರವನ್ನು ಬಯಸುತ್ತದೆಯೇ ಹೊರತು ಕುಟುಂಬಕ್ಕೆ ಆದ್ಯತೆ ನೀಡುವವರನ್ನು ಅಲ್ಲ. ಮೇಘಾಲಯವು ಆಕ್ಟ್ ಈಸ್ಟ್ ನೀತಿಯ ಆಧಾರಸ್ತಂಭವಾಗುತ್ತಿದೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ರೋಡ್ ಶೋನಲ್ಲಿ ಭಾಗವಹಿಸಿದ್ದ ಪ್ರಧಾನಿ, ಕಾರ್ಯಕ್ರಮದ ವೇಳೆ ಜನರು ತೋರಿದ ಪ್ರೀತಿ ಮತ್ತು ಬೆಂಬಲದಿಂದ ನಾನು ಖುಷಿಯಾಗಿದ್ದೇನೆ ಎಂದು ಹೇಳಿದರು. ಶಿಲ್ಲಾಂಗ್‌ನ ಬೀದಿಗಳಲ್ಲಿ ಬೆಂಗಾವಲು ಪಡೆ ಹಾದು ಹೋಗುತ್ತಿದ್ದಾಗ ಪ್ರೇಕ್ಷಕರು ಉತ್ಸಾಹದಿಂದ ‘ಮೋದಿ-ಮೋದಿ’ ಎಂದು ಹರ್ಷ ಘೋಷಣೆ ಕೂಗಿದ್ದಾರೆ.

“ಈ ಪ್ರೀತಿ, ನಿನ್ನ ಆಶೀರ್ವಾದ. ಮೇಘಾಲಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಮೂಲಕ, ಕಲ್ಯಾಣ ಯೋಜನೆಗಳನ್ನು ವೇಗಗೊಳಿಸುವ ಮೂಲಕ ನಾನು ಖಂಡಿತವಾಗಿಯೂ ಈ ಪ್ರೀತಿ ಮತ್ತು ಆಶೀರ್ವಾದವನ್ನು ಹಿಂದಿರುಗಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೇಘಾಲಯದಲ್ಲಿ ಫೆಬ್ರವರಿ 27 ರಂದು 60 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 2 ರಂದು ಫಲಿತಾಂಶ ಪ್ರಕಟವಾಗಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!