9.8 C
Munich
Friday, March 24, 2023

Same Sex Marriage: The Supreme Court adjourned the hearing of the application for legal recognition of same-sex marriage A.18 National News in kannada | Same Sex Marriage: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಅರ್ಜಿ ವಿಚಾರಣೆ ಏ.18ಕ್ಕೆ ಮುಂದೂಡಿದ ಸುಪ್ರೀಂ

ಓದಲೇಬೇಕು

ಸಲಿಂಗ ವಿವಾಹಕ್ಕೆ ಮಾನ್ಯತೆ ಕುರಿತ ಅರ್ಜಿ ವಿಚಾರಣೆ ಸಂಬಂಧಿಸಿದಂತೆ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಏಪ್ರಿಲ್​ 18ಕ್ಕೆ ಮುಂದೂಡಿದೆ. ಏಪ್ರಿಲ್ 18ರಂದು ಸಾಂವಿಧಾನಿಕ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಿದೆ.

ದೆಹಲಿ: ಸಲಿಂಗ ವಿವಾಹಕ್ಕೆ (Same Sex Marriage) ಮಾನ್ಯತೆ ಕುರಿತ ಅರ್ಜಿ ವಿಚಾರಣೆ ಸಂಬಂಧಿಸಿದಂತೆ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಏಪ್ರಿಲ್​ 18ಕ್ಕೆ ಮುಂದೂಡಿದೆ. ಏಪ್ರಿಲ್ 18ರಂದು ಸಾಂವಿಧಾನಿಕ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಿದೆ. ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಈ ಅರ್ಜಿ ವಿಚಾರಣೆ ನಡೆಸಲಿದೆ. ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಸೋಮವಾರ ನಿರ್ದೇಶನ ನೀಡಿದೆ. ವಿಚಾರಣೆಯನ್ನು ಏಪ್ರಿಲ್ 18, 2023ರಂದು ನಿಗದಿಪಡಿಸಲಾಗಿದೆ.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದನ್ನು ವಿರೋಧಿಸಿ ಕೇಂದ್ರ ಸರ್ಕಾರ ಭಾನುವಾರ (ಮಾ.12) ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತ್ತು. ಸಲಿಂಗ ಸಂಬಂಧಗಳು ಮತ್ತು ಭಿನ್ನಲಿಂಗೀಯ ಸಂಬಂಧಗಳು ಸ್ಪಷ್ಟವಾಗಿ ವಿಭಿನ್ನ ವರ್ಗಗಳಾಗಿದ್ದು, ಅವುಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಕೇಂದ್ರ ಸುಪ್ರೀಂಕೋರ್ಟ್​​ನಲ್ಲಿ ಹೇಳಿದೆ. ಸುಪ್ರೀಂಕೋರ್ಟ್‌ನಲ್ಲಿ ತನ್ನ ಪ್ರತಿ-ಅಫಿಡವಿಟ್‌ ಸಲ್ಲಿಸಿದ ಕೇಂದ್ರ ಸೆಕ್ಷನ್ 377 ಐಪಿಸಿಯ ಅಪರಾಧೀಕರಣವು ಸಲಿಂಗ ವಿವಾಹಕ್ಕೆ ಮಾನ್ಯತೆ ಸಾಧ್ಯವಿಲ್ಲ ಎಂದು ಹೇಳಿದೆ. ಭಿನ್ನಲಿಂಗೀಯ ಸ್ವಭಾವಕ್ಕೆ ಸೀಮಿತವಾದ ವಿವಾಹದ ಶಾಸನಬದ್ಧ ಮಾನ್ಯತೆ ಇತಿಹಾಸದುದ್ದಕ್ಕೂ ರೂಢಿಯಾಗಿದೆ. ಇದು ಅಸ್ತಿತ್ವ ಮತ್ತು ಮುಂದುವರಿಕೆ ಎರಡಕ್ಕೂ ಅಡಿಪಾಯವಾಗಿದೆ ಎಂದು ಕೇಂದ್ರ ಹೇಳಿದೆ. ಆದ್ದರಿಂದ, ಅದರ ಸಾಮಾಜಿಕ ಮೌಲ್ಯವನ್ನು ಪರಿಗಣಿಸಿ, ಇತರ ರೀತಿಯ ಮದುವೆ/ಸೇರುವಿಕೆ ಹೊರತುಪಡಿಸಿ ಭಿನ್ನಲಿಂಗೀಯ ವಿವಾಹಕ್ಕೆ ಮಾನ್ಯತೆ ನೀಡುವಲ್ಲಿ ಬಲವಾದ ಆಸಕ್ತಿಯನ್ನು ಹೊಂದಿದೆ ಎಂದು ಕೇಂದ್ರ ಪ್ರತಿ-ಅಫಿಡವಿಟ್ ನಲ್ಲಿ ತಿಳಿಸಿದೆ.

ಇದನ್ನೂ ಓದಿ: Same Sex Marriage: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದಕ್ಕೆ ಕೇಂದ್ರ ವಿರೋಧ

ಈ ಹಂತದಲ್ಲಿ ಬೇರೆ ಬೇರೆ ರೀತಿಯ ವಿವಾಹಗಳು ಅಥವಾ ಸೇರುವಿಕೆ, ಸಮಾಜದಲ್ಲಿ ವ್ಯಕ್ತಿಗಳ ನಡುವಿನ ಸಂಬಂಧಗಳ ವೈಯಕ್ತಿಕ ತಿಳುವಳಿಕೆಗಳು ಇರಬಹುದಾದರೂ, ರಾಜ್ಯವು ಭಿನ್ನಲಿಂಗೀಯ ರೂಪಕ್ಕೆ ಗುರುತಿಸುವಿಕೆಯನ್ನು ಮಿತಿಗೊಳಿಸುತ್ತದೆ. ಈ ಇತರ ರೀತಿಯ ವಿವಾಹಗಳು ಅಥವಾ ಸೇರುವಿಕೆ ಅಥವಾ ಸಮಾಜದಲ್ಲಿನ ವ್ಯಕ್ತಿಗಳ ನಡುವಿನ ಸಂಬಂಧಗಳ ವೈಯಕ್ತಿಕ ತಿಳುವಳಿಕೆಯನ್ನು ರಾಜ್ಯವು ಗುರುತಿಸುವುದಿಲ್ಲ ಆದರೆ ಅದು ಕಾನೂನುಬಾಹಿರವಲ್ಲ ಎಂದು ಕೇಂದ್ರ ಹೇಳಿದೆ.

ದೆಹಲಿ ಹೈಕೋರ್ಟ್ ಸೇರಿದಂತೆ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ಜನವರಿ 6 ರಂದು ಸುಪ್ರೀಂಕೋರ್ಟ್ ಒಟ್ಟಿಗೆ ಸೇರಿಸಿ ವರ್ಗಾಯಿಸಿಕೊಂಡಿತ್ತು. ಕೇಂದ್ರದ ಪರ ವಾದ ಮಂಡಿಸುತ್ತಿರುವ ವಕೀಲರು ಮತ್ತು ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲ ಅರುಂಧತಿ ಕಾಟ್ಜು ಅವರು ಲಿಖಿತ ಸಲ್ಲಿಕೆಗಳು, ದಾಖಲೆಗಳು ಮತ್ತು ಪೂರ್ವನಿದರ್ಶನಗಳ ಸಾಮಾನ್ಯ ಸಂಕಲನವನ್ನು ಸಿದ್ಧಪಡಿಸಬೇಕು ಎಂದು ಅದು ಹೇಳಿದೆ. ಸಂಕಲನಗಳ ವಿದ್ಯುನ್ಮಾನ ಪ್ರತಿ (Soft copy) ಕಕ್ಷಿದಾರರ ನಡುವೆ ವಿನಿಮಯ ಮಾಡಿಕೊಳ್ಳಬೇಕು ಮತ್ತು ನ್ಯಾಯಾಲಯಕ್ಕೆ ಲಭ್ಯವಾಗುವಂತೆ ಮಾಡಬೇಕು. ಸಂಬಂಧಿತ ಅರ್ಜಿಗಳು ಮತ್ತು ವರ್ಗಾವಣೆಗೊಂಡ ಪ್ರಕರಣಗಳೊಂದಿಗೆ ಇಂದು (ಮಾರ್ಚ್ 13, 2023) ರಂದು ನಿರ್ದೇಶನಗಳಿಗಾಗಿ ವಿಚಾರಣೆ ನಡೆಯಲಿದೆ ಎಂದು ಪೀಠವು ತನ್ನ ಜನವರಿ 6 ರ ಆದೇಶದಲ್ಲಿ ಹೇಳಿದೆ. ಆದರೆ ಇದೀಗ ಇಂದು ನಡೆಸಿದ ವಿಚಾರಯ ತೀರ್ಪುನ್ನು ನೀಡಿದ ಸುಪ್ರೀಂ ಈ ವಿಚಾರಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಿದೆ. ಕೆಲವೊಂದು ಕಾನೂನತ್ಮಕ ವಿಚಾರಣೆಗಳನ್ನು ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳಲು ಅಧ್ಯಯನದ ಅಗತ್ಯ ಇದೆ ಎಂದು ಹೇಳಿದೆ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!