12.8 C
Munich
Sunday, March 19, 2023

West Bengal Governor Ananda Bose Expels Principal Secretary Nandini Chakraborty | West Bengal: ಬಂಗಾಳ ರಾಜ್ಯಪಾಲ ಆನಂದ ಬೋಸ್ ಪ್ರಧಾನ ಕಾರ್ಯದರ್ಶಿ ಉಚ್ಛಾಟನೆ; ಕಾರಣ ಏನು?

ಓದಲೇಬೇಕು

Bengal Governor Expels Principal Secretary: ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ತಮ್ಮ ಪ್ರಧಾನ ಕಾರ್ಯದರ್ಶಿ ನಂದಿನಿ ಚಕ್ರವರ್ತಿ ಅವರನ್ನು ಉಚ್ಛಾಟಿಸಿರುವುದು ವರದಿಯಾಗಿದೆ. ಸಿಎಂ ಬ್ಯಾನರ್ಜಿಗೆ ಆಪ್ತಳಾಗಿರುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗಿದೆ.

ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್

ಕೋಲ್ಕತಾ: ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ (CV Ananda Bose) ತಮ್ಮ ಪ್ರಧಾನ ಕಾರ್ಯದರ್ಶಿ ನಂದಿನಿ ಚಕ್ರವರ್ತಿ (Nandini Chakraborty) ಅವರನ್ನು ಉಚ್ಛಾಟಿಸಿರುವುದು ವರದಿಯಾಗಿದೆ. ಶನಿವಾರವಷ್ಟೇ ರಾಜ್ಯಪಾಲರು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಮ್ದಾರ್ ಅವರನ್ನು ಭೇಟಿಯಾಗಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆಯಾಗಿರುವುದು ಗಮನಾರ್ಹ. ಟಿವಿ9 ವರದಿಗಾರರಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಜ್ಯಪಾಲರು ಇಂದು ಸೋಮವಾರ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಂದಿನಿ ಚಂದ್ರಬರ್ತಿ ಅವರನ್ನು ಉಚ್ಛಾಟಿಸಲು ಕಾರಣ ಏನೆಂದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಮೂಲಗಳ ಪ್ರಕಾರ ಐಎಎಸ್ ಅಧಿಕಾರಿಯಾಗಿರುವ ನಂದಿನಿ ಅವರು ಸಿಎಂ ಮಮತಾ ಬ್ಯಾನರ್ಜಿಗೆ ಆಪ್ತಳೆನ್ನಲಾಗಿದೆ. ಇದೇ ಕಾರಣಕ್ಕೆ ಅವರನ್ನು ಹುದ್ದೆಯಿಂದ ಹೊರತೆಗೆಯಲಾಗಿರುವುದು ತಿಳಿದುಬಂದಿದೆ.

ನಂದಿನಿ ಚಕ್ರವರ್ತಿ ಅವರನ್ನು ಕರ್ತವ್ಯದಿಂದ ವಿಮುಕ್ತಗೊಳಿಸಲಾಗಿದೆ. ಭಾನುವಾರ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಟಿವಿ9ಗೆ ಮೂಲವೊಂದು ಖಾತ್ರಿಪಡಿಸಿದೆ.

ನಂದಿನಿ ಚಕ್ರವರ್ತಿ ಅವರನ್ನು 2022, ಆಗಸ್ಟ್ 19 ರಂದು ರಾಜ್ಯಪಾಲರಿಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಆಗ ಲಾ ಗಣೇಸನ್ ರಾಜ್ಯಪಾಲರಾಗಿದ್ದರು. ಆದರೆ, ಕೆಲ ತಿಂಗಳ ಬಳಿಕ ನವೆಂಬರ್ 23ರಂದು ಸಿ.ವಿ. ಆನಂದ ಬೋಸ್ ಅವರು ರಾಜ್ಯಪಾಲರಾಗಿ ಗಣೇಸನ್ ಜಾಗಕ್ಕೆ ಬಂದರು. ಆದರೂ ನಂದಿನಿ ಚಕ್ರವರ್ತಿ ತಮ್ಮ ಹುದ್ದೆಯಲ್ಲಿ ಮುಂದುವರಿದಿದ್ದರು.

ಇದನ್ನೂ ಓದಿ: Supreme Court: ಕನ್ನಡಿಗ ನ್ಯಾ| ಅರವಿಂದ್ ಕುಮಾರ್ ಸೇರಿ ಇಬ್ಬರು ನೂತನ ಸುಪ್ರೀಂ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ

ಸಾಮಾನ್ಯವಾಗಿ ರಾಜ್ಯಪಾಲರಾದವರು ತಮ್ಮದೇ ಪ್ರತ್ಯೇಕ ತಂಡವನ್ನು ಕಟ್ಟಿಕೊಳ್ಳುತ್ತಾರೆ. ಹಿಂದೆ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ಕೂಡ ತಮ್ಮ ಆಯ್ಕೆಯ ಜನರಿರುವ ತಂಡ ರಚಿಸಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜೊತೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರಿಂದ ತಮ್ಮ ನಿರ್ಧಾರಗಳನ್ನು ಜಾಹೀರುಗೊಳಿಸಲು ಅವರಿಗೆ ತಮ್ಮದೇ ಆಯ್ಕೆಯ ತಂಡ ಇರುವುದು ಅನುಕೂಲವಾಗಿತ್ತು. ಈಗ ಆನಂದ ಬೋಸ್ ಕೂಡ ಅದೇ ಹಾದಿ ಹಿಡಿದಿದ್ದಾರೆ. ಇಲ್ಲಿ ಸಿಎಂ ಮಮತಾ ಬ್ಯಾನರ್ಜಿ ವರ್ಸಸ್ ಆನಂದ ಬೋಸ್ ಸಂಘರ್ಷದ ಘಟನೆಗಳು ಮುಂದಿನ ದಿನಗಳಲ್ಲಿ ಹೆಚ್ಚು ಕೇಳಿಬರುತ್ತಾ ಎಂಬ ಕುತೂಹಲ ಇದೆ.

ಸಿ.ವಿ. ಆನಂದ ಬೋಸ್ ಅವರು ಕೇರಳದ ಕೊಚ್ಚಿಯವರಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿಯೂ ಹೌದು. ಕೇಂದ್ರ ಸರ್ಕಾರ ಮತ್ತು ವಿಶ್ವಸಂಸ್ಥೆಯಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಪಿಎಚ್​ಡಿ ಕೂಡ ಮಾಡಿರುವ ಅವರು ಇಂಗ್ಲೀಷ್, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಕಥೆ, ಕಾದಂಬರಿ, ಕವಿತೆ ಇತ್ಯಾದಿ 32 ಪುಸ್ತಕಗಳನ್ನು ಬರೆದು ಮುದ್ರಿಸಿದ್ದಾರೆ. 1977ರ ಬ್ಯಾಚ್​ನ ಐಎಎಸ್ ಅಧಿಕಾರಿಯಾದ ಅವರು ನಿವೃತ್ತರಾದ ಬಳಿಕ ಸರ್ಕಾರದಿಂದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ರಾಜಕೀಯ ಅನುಭವ ಇಲ್ಲದ ಅವರು ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಹೇಗೆ ಎದಿರುಗೊಳ್ಳುತ್ತಾರೆ ಎಂಬುದೂ ಕೂಡ ಕುತೂಹಲ ಮೂಡಿಸಿರುವ ಸಂಗತಿ.

ತಾಜಾ ಸುದ್ದಿ

Source link

ಇನ್ನಷ್ಟು ಲೇಖನಗಳು

LEAVE A REPLY

Please enter your comment!
Please enter your name here

ಇತ್ತೀಚಿನ ಲೇಖನ

error: Content is protected !!